ತಾಲೂಕು ಸುದ್ದಿ

ಬಲ್ನಾಡು : “ಮಂಗಳೂರು ವಿಶೇಷ ಆರ್ಥಿಕ  ವಲಯ ನಿಯಮಿತ” ಇದರ ವತಿಯಿಂದ ಬೆಳಿಯೂರುಕಟ್ಟೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ.

Click below to Share News

ಬಲ್ನಾಡು: “ಮಂಗಳೂರು ವಿಶೇಷ ಆರ್ಥಿಕ  ವಲಯ ನಿಯಮಿತ” ಇದರ ವತಿಯಿಂದ ಬೆಳಿಯೂರುಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಜೂ.22ರಂದು ನಡೆಯಿತು.

ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಕಲಿಕೆಗೆ ನೇರವಾಗುವ ನಿಟ್ಟಿನಲ್ಲಿ ಕಳೆದ 6 ವರ್ಷಗಳಿಂದ ಮಂಗಳೂರು ವಿಶೇಷ ಆರ್ಥಿಕ  ವಲಯ ನಿಯಮಿತ ಇದರ ವತಿಯಿಂದ ಪುಸ್ತಕ ನೀಡಿ ಸಹಕರಿಯಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ 385 ಪುಸ್ತಕ, 55 ಪೆನ್ಸಿಲ್ ಬಾಕ್ಸ್ ಮತ್ತು 54 ಕ್ರೆಯಾನ್ಸ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೀರ್ತಿನ್ ಪಿ ಎಸ್ ಮಂಗಳೂರು ವಿಶೇಷ ಆರ್ಥಿಕ  ವಲಯ ನಿಯಮಿತ ಬಜಪೆ ಮಂಗಳೂರು, ಬಲ್ನಾಡು ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಪರಮೇಶ್ವರಿ ಭಟ್ ಬಬ್ಬಿಲಿ, ಉಪಾಧ್ಯಕ್ಸರಾದ ರವಿಚಂದ್ರ ಸಾಜ, ಶಾಲಾ ಸಂಚಾಲಕರಾದ ರಾಧಾಕೃಷ್ಣ ರೈ ಆಗರ್ತಾಬೈಲು, ಮುಖ್ಯಗುರುಗಳಾದ ಜಯರಾಮ್ ಶೆಟ್ಟಿ ಕೆಳಗಿನಮನೆ, ಪ್ರವೀಣ್ ಚಂದ್ರ ಆಳ್ವ, ಪ್ರಕಾಶ್ಚಂದ್ರ ಆಳ್ವ, ಗಣೇಶ್ ಭಟ್ ಸುದನಡ್ಕ, ಹಕೀಮ್ ಬೆಳಿಯೂರುಕಟ್ಟೆ ಉಪಸ್ಥಿತರಿದ್ದರು ಹಾಗೂ ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!