ತಾಲೂಕು ಸುದ್ದಿ
ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ (ರಿ) ಇದರ
ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ (ರಿ) ಇದರ
ವರ್ಷಾಚರಣೆ ಮತ್ತು ಆಟಿ ದಿನ ಕಾರ್ಯಕ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ.
ಪುತ್ತೂರು : ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ (ರಿ) ಇದರ 2022-23 ನೇ ಸಾಲಿನ ವರ್ಷಾಚರಣೆ ಮತ್ತು ಆಟಿ ದಿನ ಕಾರ್ಯಕ್ರಮವು ಆಗಸ್ಟ್ 6 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜು. 16ರಂದು ಪುತ್ತೂರು ದರ್ಬೆಯಲ್ಲಿರುವ ರೇಗೋ ಕಟ್ಟಡದ ಕಛೇರಿಯಲ್ಲಿ ತಾಲೂಕು ಸಂಘದ ಅಧ್ಯಕ್ಷರಾದ ಶ್ರೀ ರವಿ ಎಂಡಸಾಗು ಇವರ ನೇತೃತ್ವದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ತಾಲೂಕಿನ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ, ಹಾಗೂ ಇದರ ಗಣ್ಯರು ಭಾಗವಹಿಸಲಿದ್ದು, ಸಮಾರಂಭವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ, ಸ್ವಜಾತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷರಾದ ಶ್ರೀ ರವಿ ಎಂಡಸಾಗು ವಿನಂತಿಸಿದರು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷರಾದ ಶ್ರೀಧರ್ ಪೆರ್ಲಂಪಾಡಿ, ಪ್ರಧಾನ ಕೃಷ್ಣ ಬುಳೇರಿಕಟ್ಟೆ, ವಲಯ ಪದಾಧಿಕಾರಿಗಳಾದ ನಂದಿತಾ ಬುಳೇರಿಕಟ್ಟೆ, ರಿಶಿತಾ ಬುಳೇರಿಕಟ್ಟೆ ಹಾಗೂ ಮತ್ತಿರರು ಉಪಸ್ಥಿತರಿದ್ದರು.