ತಾಲೂಕು ಸುದ್ದಿ

ಸಾಜ : ಫೆ.18ರಂದು ಸೌಜನ್ಯ ಯುವಜನ ಸಂಘ(ರಿ.) ಸಾಜ ಇದರ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ.

Click below to Share News

ಸಾಜ : ಸೌಜನ್ಯ ಯುವಜನ ಸಂಘ(ರಿ.) ಸಾಜ ಬಲ್ನಾಡು ಇದರ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟವು ಫೆ.18ರಂದು ಸಾಜದಲ್ಲಿ ನಡೆಯಲಿದೆ.

ಬೆಳಗ್ಗೆ 8 ಗಂಟೆಗೆ ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕರಾದ ಪರಮೇಶ್ವರಿ ಭಟ್ ಬಬ್ಬಿಲಿ ಉದ್ಘಾಟನೆಯಲ್ಲಿ ನೆರವೇರಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಬಲ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರವಿಚಂದ್ರಸಾಜ ,ಹಾಜಿ ಇದ್ದು ಕುಂಞ ಸಾಜ ಮುರಳೀಕೃಷ್ಣ ಹಸಂತ್ತಡ್ಕ, ಮಹಮ್ಮದ್ ಶರೀಫ್, ಅಂಬೋಸ್ ಡಿ’ಸೋಜ, ಅಬ್ದುಲ್ ಹಕೀಂ ಸುಪ್ರೀಂ, ಗಣೇಶ್ ಭಟ್ ಸುದೆನಡ್ಕ, ಈಶ್ವರ ನಾಯ್ಕ ತಾರಿಪಡ್ಡು, ಅಣ್ಣು ನಾಯ್ಕ ಮುರುಂಗಿ, ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಸನ್ಮಾನ ಕಾರ್ಯಕ್ರಮ.
ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಕ್ರೀಡಾಪಟುಗಳಿಗೆ ಸಂಜೆ ಗಂಟೆ 4 ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸೌಜನ್ಯ ಯುವಜನ ಸಂಘ ಸಾಜ ಇದರ ಗೌರವ ಸಲಹೆಗಾರರದ ರಾಧಾಕೃಷ್ಣ ಆಳ್ವ ಸಾಜ ಇವರ ಅಧ್ಯಕ್ಷತೆಯಲ್ಲಿ,ಉದ್ಯಮಿ ಕರುಣಾಕರ ರೈ ಸನ್ಮಾನ ಕಾರ್ಯಕ್ರಮ ನಡೆಸಲಿದ್ದಾರೆ, ಇಬ್ರಾಹಿಂ ಗೋಳಿಕಟ್ಟೆ, ಸದಸ್ಯರು, ADHOC ಕಮಿಟಿ ವಾಲಿಬಾಲ್ ಎಸೋಸಿಯೇಶನ್, ಕರ್ನಾಟಕ ರಾಜ್ಯ , ನಾರಾಯಣ್ ಸಿ.ವಿ. NIS ವಾಲಿಬಾಲ್ ಕೋಚ್, ಮ್ಯಾನೇಜಿಂಗ್ ಟ್ರಸ್ಟಿ ಮಿತ್ರವೃಂದ ವಾಲಿಬಾಲ್ ಅಕಾಡೆಮಿ,ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಪ್ರಕಾಶ್ ರೈ ಬೈಲಾಡಿ, ಸುಬೋದ್ ರೈ, ಎಸ್.ಕೆ. ಅಬ್ದುಲ್ ರಹಿಮಾನ್ ಸಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ.
ವಾಲಿಬಾಲ್ ಪಂದ್ಯಾಟದ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸಂಜೆ 6.30ಕ್ಕೆ ನಡೆಯಲಿದೆ, ಚಂದಪ್ಪ ಪೂಜಾರಿ ಕಾಡ್ಲ ಅಧ್ಯಕ್ಷ ಸ್ಥಾನದಲ್ಲಿ, ಪ್ರಜ್ವಲ್ ರೈ ಅಲಂದಡ್ಕ ಬಹುಮಾನ ವಿತರಣೆ ಮಾಡಲಿದ್ದಾರೆ, ಮುಖ್ಯ ಅತಿಥಿಯಾಗಿ ರಮಾನಾಥ ಬಲ್ಯಾಯ ಭಾಗವಹಿಸಲಿದ್ದಾರೆ, ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ 4000.00 ಹಾಗೂ ಶಾಶ್ವತ ಫಲಕ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ 3000.00 ಹಾಗೂ ಶಾಶ್ವತ ಫಲಕ, ಮತ್ತು ಸವ್ಯ ಸಾಚಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಬೆಳಗ್ಗೆ 8ಗಂಟೆಗೆ ಸರಿಯಾಗಿ ಪಂದ್ಯಾಟ ನಡೆಯಲಿದೆ ಮತ್ತು ಆರಂಭದಲ್ಲಿ ಆಡಿದ ಆಟಗಾರರು ಕೊನೆಯ ವರೆಗೆ ಆಡಬೇಕಾಗುತ್ತದೆ, ಆಟಗಾರರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!