ತಾಲೂಕು ಸುದ್ದಿ

ಸಾಜ : ಶ್ರೀ ದುರ್ಗಾ – ವೆಂಕಟ್ರಮಣ ಭಜನಾ ಮಂಡಳಿಯ ನೂತನ ಸಮಿತಿ ರಚನೆ.

Click below to Share News

ಸಾಜ : ಬಲ್ನಾಡು ಗ್ರಾಮದ ಸಾಜ ಶ್ರೀ ದುರ್ಗಾ -ವೆಂಕಟ್ರಮಣ ಭಜನಾ ಮಂಡಳಿಯ ಆಡಳಿತ ಸಮಿತಿ ರಚನಾ ಸಭೆಯು ಅ.29ರಂದು ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಭಜನಾ ಮಂಡಳಿಯ ಅಧ್ಯಕ್ಷರಾದ ಜನಾರ್ಧನ ಪೂಜಾರಿ ಕಾಡ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು, ಭಜನಾ ಮಂಡಳಿಯ ಕಾರ್ಯದರ್ಶಿ ಉಮೇಶ್ ನಾಯ್ಕ ಸರೋಳಿಕಾನ ಇವರು ಸಭೆಯಲ್ಲಿ ಭಾಗವಹಿಸಿದ ಗಣ್ಯರ ಸಹಿತ ಊರಿನ ಭಕ್ತಭಿಮಾನಿಗಳಿಗೆ ಸ್ವಾಗತಿಸಿ, 36ನೇ ವರ್ಷದ ನವರಾತ್ರಿ, ಶಾರದಾ ಪೂಜೆ ಮತ್ತು ಆಯುಧ ಪೂಜಾ ಕಾರ್ಯಕ್ರಮದ ಲೆಕ್ಕಪತ್ರ ಮಂಡನೆ ಮಾಡಿದರು, ತದ ಬಳಿಕ ಕಳೆದ ಹಾಲಿ ಆಡಳಿತ ಮಂಡಳಿಯ ಅವಧಿಯಲ್ಲಿ ನಡೆದ ಅಭಿವೃದ್ಧಿ ವಿಚಾರಗಳ ಜೊತೆಗೆ ಸಮಗ್ರ ಲೆಕ್ಕಪತ್ರವನ್ನು ಸಭೆಯ ಮಂಡಿಸಿದರು.

ನೂತನ ಆಡಳಿತ ಸಮಿತಿಯ ರಚನೆ
ಶ್ರೀ ದುರ್ಗಾ -ವೆಂಕಟ್ರಮಣ ಭಜನಾ ಮಂಡಳಿಯ ಆಡಳಿತ ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ನಾಯ್ಕ ಎಮ್, ಉಪಾಧ್ಯಕ್ಷರಾಗಿ ರಾಜೇಶ್ ನಾಯ್ಕ ಎಮ್, ಕಾರ್ಯದರ್ಶಿಯಾಗಿ ಜಗದೀಶ್ ಕಾನೂಮೂಲೆ, ಜತೆ ಕಾರ್ಯದರ್ಶಿ ಕೃಷ್ಣಪ್ಪ ಕೆ ಕೂಟೇಲು, ಮತ್ತು ಖಜಾಂಜಿಯಾಗಿ ಅನಂತರಾಮ ಕೆ ಕೂಟೇಲು ಇವರನ್ನು ಆಯ್ಕೆ ಮಾಡಲಾಯಿತು,ಮತ್ತು ವಿಶೇಷವಾಗಿ ಮಹಿಳಾ ಸಮಿತಿಯ ರಚನೆ ನಡೆಯಿತು, ಇದರ ಅಧ್ಯಕ್ಷರಾಗಿ ಉಮಾವತಿ ಕೆ ( ರಚನಾ) ಕೂಟೇಲು, ಕಾರ್ಯದರ್ಶಿಯಾಗಿ ಶೋಭಾ ಎಮ್ ಮುರುಂಗಿ ಆಯ್ಕೆಯಾದರು. ಭಜನಾ ಮಂದಿರದ ಗೌರವ ಸಲಹೆಗಾರ ರಾಗಿ ಮುರಳಿ ಕೃಷ್ಣ ಭಟ್ ಹಸಂತಡ್ಕ, ಜನಾರ್ಧನ ಪೂಜಾರಿ ಕಾಡ್ಲ, ನಾಗೇಶ್ ನಾಯ್ಕ, ಸಂಜೀವ ನಾಯ್ಕ, ಉಮೇಶ್ ನಾಯ್ಕ ಸರೋಳಿಕಾನ ಇವರನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!