ತಾಲೂಕು ಸುದ್ದಿ
ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸೀತಾರಾಮ ಶೆಟ್ಟಿ ಕಂಬಳದಡ್ಡ ಹೃದಯಾಘಾತದಿಂದ ನಿಧನ..!!!
ಪುತ್ತೂರು : ವ್ಯಕ್ತಿಯೋರ್ವರು ಹೃದಯಾಘಾತದಿಂದಾಗಿ ನಿಧನರಾದ ಘಟನೆ ಸಂಪ್ಯ ಸಮೀಪ ನಡೆದಿದೆ.
ಸಂಪ್ಯ ಕಂಬಳದಡ್ಡ ನಿವಾಸಿ ಸೀತಾರಾಮ ಶೆಟ್ಟಿ (47)ಮೃತ ವ್ಯಕ್ತಿ.
ಸೀತಾರಾಮ ಶೆಟ್ಟಿ ರವರು ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದು, ಧಾರ್ಮಿಕ ಹಾಗೂ ಕಂಬಳ, ಜೇಸಿಐ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು.
ಪತ್ನಿ, ಮಕ್ಕಳು, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.