ಸರ್ವವ್ಯಾಪಿ ಪಸರಿಸುತ್ತಿರುವ ಪುತ್ತಿಲ ಪರಿವಾರ
ಪುತ್ತೂರು: ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ, ಹಿಂದುತ್ವದ ನೆಲೆಯಲ್ಲಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ, ರಾಷ್ಟ್ರೀಯ ಪಕ್ಷ ಬಿಜೆಪಿ ಅಭ್ಯರ್ಥಿಗಿಂತ ಅಧಿಕ ಮತ ಗಳಿಸಿ, ಕಾಂಗ್ರೆಸ್ ಅಭ್ಯರ್ಥಿಯಿಂದ ಕಡಿಮೆ ಮತಗಳ ಅಂತರದಲ್ಲಿ ವಿರೋಚಿತ ಸೋಲು ಕಂಡು, ಇಡೀ ದೇಶದ ಪ್ರಮುಖ ನಾಯಕರ ಗಮನಸೆಳೆದಿದ್ದರು.
ಚುನಾವಣೆ ನಾಮಪತ್ರ ಸಲ್ಲಿಕೆಯ ದಿನದಿಂದ ಆರಂಭಗೊಂಡ ಪುತ್ತಿಲ ಬೆಂಬಲಿಗರ ದಂಡು ಬಳಷ್ಟು ಸದೃಢವಾಗಿ ಬೆಳೆಯಿತ್ತಿದೆ, ಚುನಾವಣೆಮುಗಿದು ಬೆಂಬಲಿಗರೊಂದಿಗೆ, ನಮ್ಮ ನಡಿಗೆ ಶ್ರೀ ಮಹಾಲಿಂಗೇಶ್ವರನ ಕಡೆಗೆ ಎಂಬ ಬೃಹತ್ ಪಾದಯಾತ್ರೆ ಹಾಗೂ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ಮಾರುಗದ್ದೆಯಲ್ಲಿ ಸೇವಾ ಸಮರ್ಪಣಾ ಕಾರ್ಯಕ್ರಮ ನಡೆಸಿದರು.
ಈ ವೇಳೆ ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆ ಲೋಕಾರ್ಪಣೆ ಮಾಡಲಾಯಿತು, ಪ್ರಸುತ ಇದು ತಾಲೂಕು, ಜಿಲ್ಲೆ, ರಾಜ್ಯದಾದ್ಯಂತ ಪಸರಿಸಿದೆ, ದಿನದಿಂದ ದಿನಕ್ಕೆ ಸಂಘಟನೆಗೆ ಅತ್ಯಧಿಕ ಬೆಂಬಲ ದೊರೆಯುತ್ತಿದ್ದು ಪುತ್ತಿಲ ಅಭಿಮಾನಿಗಳು ಇಡೀ ರಾಜ್ಯವೇ ಪುತ್ತೂರು ಕಡೆಗೆ ಕೊಡುವಂತೆ ಮಾಡುತ್ತಿದೆ, ಸಂಘಟನೆಯ ಮುಖಂತರ ಸಮಾಜಮುಖಿ ಕೆಲಸಕಾರ್ಯಗಳು ಮತ್ತು ಧರ್ಮದ ರಕ್ಷಣೆ ಮೂಲ ಉದ್ದೇಶದಿಂದ ಸ್ಥಾಪಿತಗೊಂಡಿರುತ್ತದೆ.
ರಾಜ್ಯವ್ಯಾಪಿ ರಾರಾಜಿಸುತ್ತಿರುವ “ಅಭಿನಂದನಾ ಬ್ಯಾನರ್ ಗಳು “
ಹಿಂದುತ್ವದ ವಿಜಯ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ, ಸೋಲಿನಲ್ಲೂ ಇತಿಹಾಸ ನಿರ್ಮಿಸಿದ ಕಾರ್ಯಕರ್ತರ ನೆಚ್ಚಿನ ನಾಯಕ ಶ್ರೀ ಅರುಣ್ ಕುಮಾರ್ ಪುತ್ತಿಲ,ದಕ್ಷಿಣ ಕನ್ನಡ ಜಿಲ್ಲೆಯ ಯುವ ಜನರ ಕಣ್ಮಣಿ ಕಟ್ಟಾ ಹಿಂದುತ್ವವಾದಿ ಲೋಕಸಭಾ ಸ್ಥಾನಕ್ಕೆ ಕಾರ್ಯಕರ್ತರ ಆಯ್ಕೆ ಪುತ್ತಿಲ, ಮುಂತಾದ ಪದಗಳಿಂದ ತುಂಬಿದ ವರ್ಣರಂಜಿತ ಬ್ಯಾನರಗಳು ಎಲ್ಲಾ ಪ್ರದೇಶದಲ್ಲಿ ರಾರಾಜಿದುತ್ತಿದೆ.
ಶ್ರೀ ಅರುಣ್ ಕುಮಾರ್ ಪುತ್ತಿಲ ಮತ್ತು ಬಿಜೆಪಿ ಯ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಅರ್ಯಾಪುಗ್ರಾಮ ದೊಡ್ಡಡ್ಕದಲ್ಲಿ ಅಳವಡಿಸಲಾದ ಬ್ಯಾನರ್.
ಲೋಕಸಭಾ ಸ್ಥಾನಕ್ಕೆ ಕಾರ್ಯಕರ್ತರ ಆಯ್ಕೆ ಪುತ್ತಿಲ ಎನ್ನುವ ವಾಕ್ಯದೊಂದಿಗೆ ಮಂಗಳೂರಿನಲ್ಲಿ ಅಳವಡಿಸಲಾದ ಬ್ಯಾನರ್.
ಶ್ರೀ ಅರುಣ್ ಕುಮಾರ್ ಪುತ್ತಿಲ ಅಭಿಮಾನಿ ಬಳಗದಿಂದ ಅರ್ಯಾಪುಗ್ರಾಮದ ಮಚ್ಚಿಮಲೆಯಲ್ಲಿ ಅಳವಡಿಸಿದ ಬ್ಯಾನರ್.
ಅರುಣ್ ಕುಮಾರ್ ಪುತ್ತಿಲ ಸಹಿತ ಬಿಜೆಪಿಯ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಕೋಲ್ಚಾರಿನಲ್ಲಿ ಅಳವಡಿಸಲಾದ ಬ್ಯಾನರ್.
ಪುತ್ತಿಲ ಅಭಿಮಾನಿ ಬಳಗ ಕುದ್ದುಪದವು ಇವರಿಂದ ಅರುಣ್ ಕುಮಾರ್ ಪುತ್ತಿಲ ಮತ್ತು ನೂತನ ಶಾಸಕರಿಗೆ ಅಭಿನಂದನಾ ಬ್ಯಾನರ್.
ಉರ್ವ ಮಾರಿಗುಡಿ ಪುತ್ತಿಲ ಅಭಿಮಾನಿ ಬಳಗ
ಬೆಳ್ತಂಗಡಿ ತಾಲೂಕಿನ ಬಳ್ಳಮಂಜದ ಪುತ್ತಿಲ ಅಭಿಮಾನಿ ಬಳಗದ ವತಿಯಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಅರುಣ್ ಕುಮಾರ್ ಪುತ್ತಿಲ ಇವರಿಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಅಳವಡಿಸಲಾಗಿದೆ.