ತಾಲೂಕು ಸುದ್ದಿ
ವಾಮಾಚಾರ ಮಾಡಿರುವುದಾಗಿ ಮಾನಹಾನಿ ಸಂದೇಶ ರವಾನೆ ಮಾಡಿದವರಿಗೆ ಸದ್ಭುದ್ಧಿ ನೀಡಲೆಂದು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮುರಳಿಕೃಷ್ಣ ಹಸಂತಡ್ಕ ಪ್ರಾರ್ಥನೆ.
ಪುತ್ತೂರು: ಚುನಾವಣೆ ಸಂದರ್ಭ ಅರುಣ್ ಕುಮಾರ್ ಪುತ್ತಿಲರ ಮೇಲೆ ವಾಮಾಚಾರ ಹೋಮ ಮಾಡಿಸಿದ್ದಾರೆಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಮೇಲೆ ಆರೋಪ ಮಾಡಿ ಆಧಾರ ರಹಿತವಾಗಿ ಮಾನಹಾನಿ ಸಂದೇಶ ರವಾನಿಸುತ್ತಿರುವ ಆರೋಪಿಗಳಿಗೆ ಮತ್ತು ಅದಕ್ಕೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪುತ್ತೂರು ಪೊಲೀಸರಿಗೆ ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ದೂರು ನೀಡಿದ್ದಾರೆ. ಮತ್ತು ಜೂ.30ರಂದು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಸಂದೇಶ ರವಾನೆ ಮಾಡುತ್ತಿರುವವರಿಗೆ ಸದ್ಭುದ್ಧಿಯನ್ನು ಕರುಣಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.