ತಾಲೂಕು ಸುದ್ದಿ
ತೆಂಗಿನ ಮರದಿಂದ ಬಿದ್ದು ಪದರಂಜ ರಾಮಣ್ಣ ಪೂಜಾರಿ ಮೃತ್ಯು.
ಇರ್ದೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇರ್ದೆ ಗ್ರಾಮದ ಪದರಂಜ ಎಂಬಲ್ಲಿ ನಡೆದಿದೆ.
ಪದರಂಜ ನಿವಾಸಿ ರಾಮಣ್ಣ ಪೂಜಾರಿ(68) ಮೃತಪಟ್ಟ ದುರ್ದೈವಿ.
ಸೆ. 23ರಂದು ಮನೆ ಬಳಿಯ ತೆಂಗಿನ ಮರ ಹತ್ತುವ ಸಂದರ್ಭ ಘಟನೆ ನಡೆದಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ, ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ.