ತಾಲೂಕು ಸುದ್ದಿ
ಪುತ್ತೂರು : ತಾಲೂಕು ಕಛೇರಿ ತಾತ್ಕಾಲಿಕ ನೆಲೆಯಲ್ಲಿ ರೆಕಾರ್ಡ್ ರೂಮ್ ನಿರ್ವಹಣೆ ಉದ್ಯೋಗಿ ಕರ್ಕುಂಜ ನಿವಾಸಿ ಹರೀಶ್ ನಿಧನ.!
ಪುತ್ತೂರು : ಕಳೆದ 25 ವರುಷಗಳಿಂದ ತಾಲೂಕು ಕಛೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ರೆಕಾರ್ಡ್ಸ್ ರೂಮ್ ನಿರ್ವಹಣೆ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದ ಕರ್ಕುಂಜ ನಿವಾಸಿ ಹರೀಶ್ (45) ಆ.22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇತ್ತೀಚೆಗೆ ಅನಾರೋಗ್ಯ ಕಾರಣದಿಂದಾಗಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರೀಶ್ ಚಿಕಿತ್ಸೆ ಫಲಿಸದೆ ಇಂದು ನಿಧನರಾದರು.
ಮೃತರು ತಂದೆ ಲೋಕಯ್ಯ ನಾಯ್ಕ ತಾಯಿ ಸೀತಾ ಲೋಕಯ್ಯ, ಪತ್ನಿ ರಮ್ಯ, ಪುತ್ರ ಶ್ರೇಯಸ್ ಹಾಗೂ ಸಹೋದರರಾದ ವಿಜಯ್, ದಿನೇಶ್ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ