ತಾಲೂಕು ಸುದ್ದಿ
ಪುತ್ತೂರು : ನೀರಿಗಿಳಿದಿದ್ದ ವೇಳೆ ಹೃದಯಾಘಾತ.
![](https://veekshakanews.com/wp-content/uploads/2023/11/IMG-20231114-WA0019-1-720x470.jpg)
ಪುತ್ತೂರು : ನೀರಿಗಿಳಿದಿದ್ದ ವೇಳೆ ಹೃದಯಾಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟ ಘಟನೆ ಇರ್ದೆ ಬೇಂದ್ರೆ ತೀರ್ಥ ಬಳಿ ನಡೆದಿದೆ.
![](https://veekshakanews.com/wp-content/uploads/2023/11/IMG-20231114-WA0019-670x1024.jpg)
ದೇವಸ್ಯ ನಿವಾಸಿ ಸುಜಿತ್ (27) ಮೃತ ಯುವಕ.
ಸುಜಿತ್ ರವರು ಇರ್ದೆ ಬೇಂದ್ ತೀರ್ಥ ಬಳಿ ಇರುವ ಸಂಬಂಧಿಕರ ಮನೆಗೆ ತೆರಳಿದ್ದು, ಈ ವೇಳೆ ನೀರಿಗಿಳಿದಿದ್ದು, ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆನ್ನಲಾಗಿದೆ.
ಸುಜಿತ್ ಬೊಳುವಾರಿನ ಗ್ಯಾರೇಜ್ ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಮನೆಯವರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.