ತಾಲೂಕು ಸುದ್ದಿ

ಪುತ್ತೂರು : ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ ಯುವಕ ಪ್ರಸಾದ್ ಮೃತ್ಯು.!!

Click below to Share News

ಮಂಗಳೂರು : ಪುತ್ತೂರಿನ ಪರ್ಲಡ್ಕ ಬೈಪಾಸ್‌ ಬಳಿ ಫೆ.29 ರಂದು ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ಮೆಕ್ಯಾನಿಕ್ ಶಾಂತಿಗೋಡಿನ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಶಾಂತಿಗೋಡು ಗ್ರಾಮದ ಬೀರ್ಮಕಜೆ ನಿವಾಸಿ, ಪುತ್ತೂರು ಬೈಪಾಸ್‌ ರಸ್ತೆಯ ಗ್ಯಾರೇಜೊಂದರಲ್ಲಿ ಮೆಕಾನಿಕ್ ಆಗಿರುವ ಪ್ರಸಾದ್ (27) ಮೃತ ಯುವಕ.
ಪ್ರಸಾದ್ ಫೆ.29 ರಂದು ಪರ್ಲಡ್ಕ ಬೈಪಾಸ್ ಬಳಿ ಬೈಕ್‌ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ. ಯುವಕನಿಗೆ ಪುತ್ತೂರು ಖಾಸಗಿ ಆಸ್ಪತ್ರೆಯೊಂದರಲ್ಲಿ ಸರಿಯಾದ ಪ್ರಥಮ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿ ಯುವಕನ ಸ್ನೇಹಿತರು ಹಾಗೂ ಊರವರು ಆಸ್ಪತ್ರೆಯ ಮುಂದೆ ಜಮಾಯಿಸಿ, ವಾಗ್ವಾದ ನಡೆಸಿದ್ದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!