ಪುತ್ತೂರು : ಶ್ರೀ ಮಹಮ್ಮಾಯಿ ದೇವಿ ಮತ್ತು ಭೈರವ ದೈವದ ಫೋಟೋ ಮತ್ತು ವಿಡಿಯೋ ದುರುಪಯೋಗ : ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲು
ಪುತ್ತೂರು : ಶ್ರೀ ಮಹಮ್ಮಾಯಿ ದೇವಿ ಮತ್ತು ಭೈರವ ದೈವದ ಫೋಟೋ ಮತ್ತು ವಿಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ದುರುಪಯೋಗ ಮಾಡಿಕೊಂಡು ಮರಾಟಿ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರದಕ್ಕ ಪಂಡಿತ್ ಶ್ರೀ ರಾಮದೇವ್ ಭಟ್ ಗುರೂಜಿ ಅವನ ವಿರುದ್ಧ ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಪ್ರಕರಣ ‘ಓಂ ಶ್ರೀ ಕೊಲ್ಲೂರು ಮುಕಾಂಬಿಕಾ ಜ್ಯೋತಿಷ್ಯ ಫಲಂ” ಎಂಬ ಶೀರ್ಷಿಕೆಯಲ್ಲಿ ಉಚಿತ ಭವಿಷ್ಯ ಉಚಿತ ಪರಿಹಾರ ಎಂಬ ವಾಕ್ಯಗಳೊಂದಿಗೆ ಪಂಡಿತ್ ಶ್ರೀ ರಾಮದೇವ್ ಭಟ್ ಗುರೂಜಿ ಎಂಬಾತ ಪರಿಶಿಷ್ಟ ಪಂಗಡದ ಮರಾಟಿ ಸಮುದಾಯದ ಆರಾಧ್ಯ ದೇವರು, ಶ್ರೀ ಮಹಮ್ಮಾಯಿ ಅಮ್ಮನವರ ಗೋಂದೊಳು ಪೂಜಾ ವಿಧಿ-ವಿಧಾನಗಳು ಮತ್ತು ಭೈರವ ಆರಾಧನ ಫೋಟೋ ಮತ್ತು ವಿಡಿಯೋ ಎಡಿಟ್ ಮಾಡಿರುವುದು ಗಮನಕ್ಕೆ ಬಂದಿರುತ್ತದೆ. ಸದ್ರಿ ವ್ಯಕ್ತಿಯು ಮರಾಟಿ ಸಮುದಾಯವು ಅನಾದಿಕಾಲದಿಂದ ಭಯ-ಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ ದೇವರನ್ನು ನೀಚ ಕಾರ್ಯಕ್ಕೆ ಬಳಕೆ ಮಾಡಿದ ಪಂಡಿತ್ ಶ್ರೀ ರಾಮದೇವ್ ಭಟ್ ಅವರನ್ನು ತಕ್ಷಣ ಬಂಧಿಸಿ,ಉಗ್ರ ಶಿಕ್ಷೆ ನೀಡುವಂತೆ ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ ವತಿಯಿಂದ, ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲು .