ತಾಲೂಕು ಸುದ್ದಿ

ಪುತ್ತೂರು : ಅನುಮತಿ ಇಲ್ಲದೆ ವಿಜಯೋತ್ಸವ, ಡಿ ಜೆ ಬಳಕೆ – ಪುತ್ತಿಲ ಪರಿವಾರದ ವಿರುದ್ಧ ಪ್ರಕರಣ ದಾಖಲು

Click below to Share News

ಪುತ್ತೂರು: ಅನುಮತಿ ಇಲ್ಲದೆ ವಿಜಯೋತ್ಸವ ಮತ್ತು ಡಿ ಜೆ ಸೌಂಡ್ ಬಳಕೆ ಮಾಡಿದ್ದಕ್ಕಾಗಿ ಪುತ್ತಿಲ ಪರಿವಾರ ಸಂಘಟನೆ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್ಯಾಪು ಗ್ರಾ.ಪಂ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಗಳಿಸಿದ ಹಿನ್ನಲೆಯಲ್ಲಿ ತಾಲೂಕು ಆಡಳಿತ ಸೌಧದಿಂದ ಮುಕ್ರಂಪಾಡಿ ತನಕ ಅನುಮತಿ ಇಲ್ಲದೇ ಪುತ್ತಿಲ ಪರಿವಾರ ನಡೆಸಿದ ವಿಜಯೋತ್ಸವದಲ್ಲಿ ಡಿ ಜೆ ಸೌಂಡ್ ಬಳಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿ, ಪುತ್ತಿಲ ಪರಿವಾರ ವಿರುದ್ಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಶಾಂತಿಭಂಗದ ಪ್ರಕರಣ ದಾಖಲಿಸಲಾಗಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!