ತಾಲೂಕು ಸುದ್ದಿ
ಸೌಜನ್ಯ ಕೊಲೆ ಪ್ರಕರಣ: ಸಂತೋಷ್ ರಾವ್ ಪರ ವಾದ ಮಂಡಿಸಿದ ಪುತ್ತೂರಿನ ವಕೀಲ ಮೋಹಿತ್ ಕುಮಾರ್
ಪುತ್ತೂರು: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್ ಪರ ನ್ಯಾಯಾಲಯದಲ್ಲಿ ವಾದಿಸಿದ್ದು ಪುತ್ತೂರಿನ ವಕೀಲ.
ಆ ಯುವ ವಕೀಲನ ಹೆಸರು ಮೋಹಿತ್ ಕುಮಾರ್ ಅಡಾರ್ಮಜಲ್. ಪುತ್ತೂರು ತಾಲೂಕಿನ ಕೊಳಿಗೆ ಗ್ರಾಮದವರು.
ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ, ಸಂತೋಷ್ ರಾವ್ ಅವರಿಂದ ೧ ರೂ.ವನ್ನು ಪಡೆಯದೇ ವಾದಿಸಿದ್ದು ಇಲ್ಲಿ ವಿಶೇಷ.
ಸಂತೋಷ್ ರಾವ್ ಅವರನ್ನು ಆರೋಪಿ ಎಂದು ಬಂಧಿಸಿದಾಗಲೇ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಈ ಅನುಮಾನಗಳ ಎಳೆಯನ್ನು ಇಟ್ಟುಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಮೋಹಿತ್ ಅವರ ವಾದವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ನ್ಯಾಯಾಲಯದಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತು ಪಡಿಸಲು ಮೋಹಿತ್ ಯಶಸ್ವಿಯಾಗಿದ್ದಾರೆ.