ತಾಲೂಕು ಸುದ್ದಿ

ಪತಿಯ ಸಾವಿನ ನೋವಿನಿಂದ ಹೊರಬರಲಾರದೇ ಪತ್ನಿ ತವರುಮನೆಯಲ್ಲಿ ಆತ್ಮಹತ್ಯೆ.!

Click below to Share News

ಪೆರಾಜೆ : ಪತಿಯ ಅಗಲುವಿಕೆಯ ನೋವಿನಿಂದ ಹೊರಬರಲಾರದೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸವಣೂರು ಗ್ರಾಮದ ಪೆರಿಯಡ್ಕ ನಿವಾಸಿ ದಿ.ದಿನೇಶ್ ಪೆರಿಯಡ್ಕ ಅವರ ಪತ್ನಿ ರೂಪಾ (30ವ.) ಎಂದು ಗುರುತಿಸಲಾಗಿದೆ.

ಪತಿಯ ನಿಧನದ ಬಳಿಕ ತವರು ಮನೆ ಕೊಡಗು ಜಿಲ್ಲೆಯ ಪೆರಾಜೆಗೆ ಹೋಗಿದ್ದರು. ಅಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೂಪಾ ಅವರು ಮೂಲತಃ ಕೊಡಗು ಜಿಲ್ಲೆಯ ಪೆರಾಜೆಯವರು. ಎರಡು ವರ್ಷಗಳ ಹಿಂದೆ ಅವರನ್ನು ಸವಣೂರಿನ ಪೆರಿಯಡ್ಕದ ದಿನೇಶ್ ಅವರೊಂದಿಗೆ ಮದುವೆ ಮಾಡಿಮಾಡಲಾಗಿತ್ತು. ದಿನೇಶ್ ಪೆರಿಯಡ್ಕ ಅವರು ಹೃದಯಾಘಾತದಿಂದ ಆ.7 ರಂದು ನಿಧನ ಹೊಂದಿದ್ದರು. ಇದಾದ ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಕೊಡಗು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!