ಸಾಜ : ಸೆ.6ರಂದು ಸಾಜ ಶ್ರೀ ದುರ್ಗಾ- ವೆಂಕಟ್ರಮಣ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಸಂಭ್ರಮ.
![](https://veekshakanews.com/wp-content/uploads/2023/09/IMG-20230818-WA0005-2-780x369.jpg)
ಸಾಜ : ವಿಶ್ವ ಹಿಂದೂ ಪರಿಷದ್ ಸಾಜ ಇದರ ನೇತೃತ್ವದಲ್ಲಿ ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರ (ರಿ.) ಸಾಜ, ಬಲ್ನಾಡು ಇದರ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ಸಾಜ ಇವರ ಸಂಯುಕ್ತ ಆಶ್ರಯದಲ್ಲಿ 16ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಯು ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಸೆ.6ರಂದು ಸಾಜ ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರದ ವಠಾರದಲ್ಲಿ ನಡೆಯಲಿದೆ.
![](https://veekshakanews.com/wp-content/uploads/2023/09/IMG-20230818-WA0005.jpg)
ಬೆಳಗ್ಗೆ ಸ್ಥಳೀಯ ಪುಟಾಣಿ ಮಕ್ಕಳು ದೀಪ ಪ್ರಜ್ವಲನೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ, ಬಳಿಕ ಪುರುಷರಿಗೆ, ಮಹಿಳೆಯರಿಗೆ, ಮತ್ತು ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು, 5 ವರ್ಷದ ಒಳಗಿನ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿದೆ, ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
![](https://veekshakanews.com/wp-content/uploads/2023/09/images-2.jpeg)
ಸಮಾರೋಪ ಸಮಾರಂಭ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ.
ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ಸಂಜೆ ಗಂಟೆ 5ಕ್ಕೆ ನಡೆಯಲಿದೆ, ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಇದರ ಅಧ್ಯಕ್ಷರಾದ ಕೃಷ್ಣಪ್ಪ ಕೆ, ಕೂಟೇಲು ವಹಿಸಲಿದ್ದಾರೆ, ಗೌರವ ಉಪಸ್ಥಿತಿ ಪ್ರಗತಿಪರ ಕೃಷಿಕರಾದ ನಾರಾಯಣ ರೈ ಸಾಜ, ಧಾರ್ಮಿಕ ಉಪನ್ಯಾಸಕರಾಗಿ ವಿವೇಕಾನಂದ ಕಾಲೇಜು, ಪುತ್ತೂರು ಇಲ್ಲಿನ ಇತಿಹಾಸ ಉಪನ್ಯಾಸಕರಾದ ಡಾ| ಪ್ರಮೋದ್ ಎಂ. ಜಿ. ಭಾಗವಹಿಸಲಿದ್ದಾರೆ, ಹಾಗೂ ಮುಖ್ಯ ಅತಿಥಿಗಳಾಗಿ ರವಿಚಂದ್ರ ಸಾಜ, ಉಪಾಧ್ಯಕ್ಷರು, ಬಲ್ನಾಡು ಗ್ರಾಮ ಪಂಚಾಯತ್ , ಚಂದಪ್ಪ ಪೂಜಾರಿ ಕಾಡ್ಲ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಬೆಳಿಯೂರುಕಟ್ಟೆ , ಜನಾರ್ಧನ ಪೂಜಾರಿ ಕಾಡ್ಲ ಅಧ್ಯಕ್ಷರು ಶ್ರೀದುರ್ಗಾ-ವೆಂಕಟ್ರಮಣ ಭಜನಾ ಮಂದಿರ(ರಿ) ಸಾಜ, ಬಲ್ನಾಡು ಮತ್ತು ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ವಸಂತಿ ಹರೀಶ್ ಪೂಜಾರಿ ಮತ್ತು ಶೋಭಾ ಯಂ, ಭಾಗವಹಿಸಲಿದ್ದಾರೆ, ಈ ಎಲ್ಲಾ ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಸಂಘಟಕರು ತಿಳಿಸಿದ್ದಾರೆ.