ರಾಜ್ಯ
ಚಿಕ್ಕಮಗಳೂರು : ಕಾಡಾನೆ ದಾಳಿಗೆ ಓರ್ವ ಬಲಿ..!!
![](https://veekshakanews.com/wp-content/uploads/2023/09/1200-675-19420949-thumbnail-16x9-than-1-780x470.jpg)
ಚಿಕ್ಕಮಗಳೂರು: ಆಲ್ದೂರು ಸಮೀಪದ ಅರೆನೂರು-ಕಂಚುಕಲ್ ದುರ್ಗಾ ಬಳಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
![](https://veekshakanews.com/wp-content/uploads/2023/09/3297592976a0121fff84063a7adc6a6a4eb00e9b4b9ce6335476cb1391ee2c2de7879d9a-1.jpg)
ದುರ್ಗಾ ಗ್ರಾಮದ ಕಿನ್ನಿ(60) ಮೃತಪಟ್ಟಿದ್ದು, ಬೆಳಿಗ್ಗೆ ತಮ್ಮ ತೋಟಕ್ಕೆ ಕಾಲುದಾರಿಯಲ್ಲಿ ಹೋಗುತ್ತಿದ್ದಾಗ ಆನೆ ದಾಳಿ ನಡೆಸಿದೆ. ಕಿನ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
![](https://veekshakanews.com/wp-content/uploads/2023/09/1200-675-19420949-thumbnail-16x9-than-1024x576.jpg)
ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು.
ತೋಟದಲ್ಲೇ ಇರುವ ಆನೆಗಳನ್ನು ಅರಣ್ಯ ಸಿಬ್ಬಂದಿಗಳು ಕಾಡಿನತ್ತ ಓಡಿಸಿದರು.