ದೇಶ
ಬಾಲ ರಾಮನಿಗೆ ಪ್ರಾಣಪ್ರತಿಷ್ಟೆ: ವಿಧಿ ವಿಧಾನ ಆರಂಭ, ಪ್ರಧಾನಿ ಸಹಿತ ಹಲವು ಗಣ್ಯರು ಬಾಗಿ.
![](https://veekshakanews.com/wp-content/uploads/2024/01/IMG-20240122-WA0082-780x470.jpg)
ಅಯೋಧ್ಯೆ ಜ 22 : ಹಲವು ಶತಮಾನಗಳ ಕಾಯುವಿಕೆಗೆ ಫಲ ಸಿಗುವ ಕ್ಷಣ ಸನ್ನಿಹಿತವಾಗಿದೆ. ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಪ್ರಾಣಪ್ರತಿಷ್ಟೆಯ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ರಾಮ ಮಂದಿರ ತಲುಪಿದ್ದಾರೆ.
![](https://veekshakanews.com/wp-content/uploads/2024/01/image_editor_output_image1246181730-17059098001362126012034151527853-1024x583.jpg)
ಮಧ್ಯಾಹ್ನ 12.20ರಿಂದ 12.45ರ ಅವಧಿಯಲ್ಲಿ ಅಭಿಜಿನ್ ಮಹೂರ್ತದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಐವರು ಮಾತ್ರ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿಸಲಿದ್ದಾರೆ.
![](https://veekshakanews.com/wp-content/uploads/2024/01/image_editor_output_image-1613368161-17059094131967183819827876059094-1024x665.jpg)
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಒಟ್ಟು ಹತ್ತು ಹಂತಗಳಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಆರು ಹಂತದಲ್ಲಿ ವಿಗ್ರಹದ ಕಣ್ಣು ತೆರೆಯಲಾಗುತ್ತದೆ. ಬಳಿಕ ಪ್ರಧಾನಿ ಮೋದಿಯವರು ವಿಗ್ರಹಕ್ಕೆ ನೇತ್ರೋನ್ಮಿಲನ ಕ್ರಿಯೆಯನ್ನು ನಡೆಸಿಕೊಡಲಿದ್ದಾರೆ. ಇದಾದ ಬಳಿಕ ಪ್ರಾರ್ಥನೆ ನೆರವೇರಲಿದೆ.
![](https://veekshakanews.com/wp-content/uploads/2024/01/img_20240122_1323218228786308084538702-1024x626.jpg)