ರಾಜ್ಯ
ಕಾಸರಗೋಡು : ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು.
ಕಾಸರಗೋಡು,ಡಿ 09: ಲಾರಿಯಡಿಗೆ ಸಿಲುಕಿ ಚಾಲಕ ಮೃತ ಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಬದಿಯಡ್ಕ ಸಮೀಪದ ನಿರ್ಚಾಲ್ ಗೋಳಿಯಡ್ಕ ದಲ್ಲಿ ಎಂಬಲ್ಲಿ ನಡೆದಿದೆ.
ಪಾಡಿ ಉತ್ತರತ್ತೋಡಿಯ ಮುಹಮ್ಮದ್ ನೌಫ ಲ್ (23) ಮೃತಪಟ್ಟ ದುರ್ದೈವಿ. ಲಾರಿಯನ್ನು ಸ್ಟಾರ್ಟ್ನಲ್ಲಿರಿಸಿ ಗೇಟ್ ತೆರೆಯಲು ಹೋದ ಸಂದರ್ಭದಲ್ಲಿ ಅದೇ ಲಾರಿ ಮುಂದಕ್ಕೆ ಸಂಚರಿಸಿ ಲಾರಿಯಡಿಗೆ ಸಿಲುಕಿ ಈ ದಾರುಣ ಘಟನೆ ನಡೆದಿದೆ. ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲಾಪಿಸಿದರೂ ಜೀವ ಉಳಿಸಲಾಗಲಿಲ್ಲ.
ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ