ಪುತ್ತೂರು : ಜೂನ್ 16ರಂದು ಪುತ್ತೂರಿನ 22 ಗ್ರಾಮ ಪಂಚಾಯತ್ ಗಳ ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ
ಪುತ್ತೂರು : ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಅತೀ ಮುಖ್ಯವಾಗಿದೆ.
ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರುವ ಅನುದಾನಗಳು ಮಾತ್ರವಲ್ಲದೆ ತಳಮಟ್ಟದ ಅಭಿವೃದ್ಧಿಗಾಗಿ ಈ ತ್ರಿಸ್ತರ ಪದ್ಧತಿ ಜಾರಿಯಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಜನ ಸಾಮಾನ್ಯರನ್ನು ತಲುಪುವ ಗ್ರಾಮ ಪಂಚಾಯತ್ ವ್ಯವಸ್ಥೆಯು ಸ್ಥಳೀಯ ಸರಕಾರ ಎಂದೇ ಕರೆಸಿಕೊಳ್ಳುತ್ತಿದೆ. ಇಂತಹ ಸ್ಥಳೀಯ ಸರಕಾರದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ ಆಯ್ಕೆ ಮೀಸಲಾತಿ ನಿಗದಿ ಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.
ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್ ಗಳ ಹೊಸ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಮೀಸಲಾತಿ ನಿಗದಿ ಪಡಿಸುವಿಕೆ ನಾಳೆ ಜೂನ್ 16ರಂದು ಪುರಭವನದಲ್ಲಿ ನಡೆಯಲಿದೆ.
ಕೋಡಿಂಬಾಡಿ, 34-ನೆಕ್ಕಿಲಾಡಿ, ಒಳಮೊಗ್ರು, ಬಜತ್ತೂರು, ಕೆಯ್ಯರು, ಮುಂಡೂರು, ಕಬಕ, ಬನ್ನೂರು, ಬಲ್ನಾಡು, ಕೊಳಿಗೆ, ಕೆದಂಬಾಡಿ, ನೆಟ್ಟಣಿಗೆ ಮುಡೂರು, ಉಪ್ಪಿನಂಗಡಿ, ಹಿರೇಬಂಡಾಡಿ, ಬೆಟ್ಟಂಪಾಡಿ, ಪಾಣಾಜೆ, ಬಡಗನ್ನೂರು, ಆರ್ಯಾಪು, ಅರಿಯಡ್ಕ, ನಿಡ್ನಳ್ಳಿ, ನರಿಮೊಗರು, ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಗಳ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಡೆಯಲಿದೆ.