ರಾಜ್ಯ
ಒರಿಸ್ಸಾದಲ್ಲಿ ನಡೆದ ಜನ ಜಾತಿ ಖೇಲ್ ಮಹೋತ್ಸವ, ಮಹಿಳಾ ಕಬ್ಬಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡಕ್ಕೆ ಪ್ರಥಮ ಸ್ಥಾನ
![](https://veekshakanews.com/wp-content/uploads/2023/06/IMG-20230613-WA0008-1-780x470.jpg)
ಒರಿಸ್ಸಾ : ಒರಿಸ್ಸಾದ ಭುವನೇಶ್ವರ ಕ್ರೀಡಾಂಗಣದಲ್ಲಿ ಜೂನ್ 9 ರಿಂದ 12 ರ ತನಕ ಜನ ಜಾತಿ ಖೇಲ್ ಮಹೋತ್ಸವ-2023 ನಡೆಯಿತು. ಈ ಕ್ರೀಡಾ ಮಹೋತ್ಸವದಲ್ಲಿ ಮಹಿಳೆಯರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡ ಪ್ರಥಮ ಸ್ಥಾನಕ್ಕೆ ಅರ್ಹವಾಗಿ ಚಿನ್ನದ ಪದವನ್ನು ಪಡೆದುಕೊಂಡಿದೆ.
![](https://veekshakanews.com/wp-content/uploads/2023/06/IMG-20230613-WA0008-1024x729.jpg)
ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಎರಡು ಹಿರಿಯ ವಿದ್ಯಾರ್ಥಿಗಳು
![](https://veekshakanews.com/wp-content/uploads/2023/06/IMG-20230614-WA0009.jpg)
ಕರ್ನಾಟಕ ಮಹಿಳಾ ಕಬ್ಬಡಿ ತಂಡದಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ, ಬಲ್ನಾಡು ಗ್ರಾಮದ ಸಾಜ ದ ಯಶಸ್ವಿ ಮತ್ತು ಹಾವೇರಿ ಯ ಸೌಜನ್ಯ ಭಾಗವಹಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕ ಕಬಡ್ಡಿ ತಂಡದ ನಾಯಕಿಯಾಗಿ ಯಶಸ್ವಿ ಸಾಜ
![](https://veekshakanews.com/wp-content/uploads/2023/06/IMG-20230613-WA0009-1.jpg)
ಪಂದ್ಯಕೂಟದಲ್ಲಿ ಪ್ರತಿನಿಧಿಸಿದ ಕರ್ನಾಟಕ ಮಹಿಳಾ ಕಬಡ್ಡಿ ತಂಡದ ನಾಯಕಿಯಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಹಿರಿಯ ವಿದ್ಯಾರ್ಥಿ ಯಶಶ್ವಿ ಸಾಜ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿರುತ್ತಾಳೆ.