ರಾಜ್ಯ

ಒರಿಸ್ಸಾದಲ್ಲಿ ನಡೆದ ಜನ ಜಾತಿ ಖೇಲ್ ಮಹೋತ್ಸವ, ಮಹಿಳಾ ಕಬ್ಬಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡಕ್ಕೆ ಪ್ರಥಮ ಸ್ಥಾನ

Click below to Share News

ಒರಿಸ್ಸಾ : ಒರಿಸ್ಸಾದ ಭುವನೇಶ್ವರ ಕ್ರೀಡಾಂಗಣದಲ್ಲಿ ಜೂನ್ 9 ರಿಂದ 12 ರ ತನಕ ಜನ ಜಾತಿ ಖೇಲ್‌ ಮಹೋತ್ಸವ-2023 ನಡೆಯಿತು. ಈ ಕ್ರೀಡಾ ಮಹೋತ್ಸವದಲ್ಲಿ ಮಹಿಳೆಯರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡ ಪ್ರಥಮ ಸ್ಥಾನಕ್ಕೆ ಅರ್ಹವಾಗಿ ಚಿನ್ನದ ಪದವನ್ನು ಪಡೆದುಕೊಂಡಿದೆ.

ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಎರಡು ಹಿರಿಯ ವಿದ್ಯಾರ್ಥಿಗಳು

ಕರ್ನಾಟಕ ಮಹಿಳಾ ಕಬ್ಬಡಿ ತಂಡದಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ, ಬಲ್ನಾಡು ಗ್ರಾಮದ ಸಾಜ ದ ಯಶಸ್ವಿ ಮತ್ತು ಹಾವೇರಿ ಯ ಸೌಜನ್ಯ ಭಾಗವಹಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಕರ್ನಾಟಕ ಕಬಡ್ಡಿ ತಂಡದ ನಾಯಕಿಯಾಗಿ ಯಶಸ್ವಿ ಸಾಜ

ಪಂದ್ಯಕೂಟದಲ್ಲಿ ಪ್ರತಿನಿಧಿಸಿದ ಕರ್ನಾಟಕ ಮಹಿಳಾ ಕಬಡ್ಡಿ ತಂಡದ ನಾಯಕಿಯಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಹಿರಿಯ ವಿದ್ಯಾರ್ಥಿ ಯಶಶ್ವಿ ಸಾಜ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿರುತ್ತಾಳೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!