ಸಮಗ್ರ ಸುದ್ದಿ
ಸುರತ್ಕಲ್: ಪಣಂಬೂರು ಬೀಚ್ನಲ್ಲಿ ತೇಲುವ ಸೇತುವೆ.
![](https://veekshakanews.com/wp-content/uploads/2023/12/255848237603816206b349b869a197b5ae0dce24c6a07c00153b36eeeaf3d1aea7538b262-780x470.jpg)
ಸುರತ್ಕಲ್ : ಪಣಂಬೂರು ಬೀಚ್ನಲ್ಲಿ ತೇಲುವ ಸೇತುವೆ ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ.
ಉಡುಪಿಯ ಮಲ್ಪೆ ಬೀಚ್ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬೀಚ್ನಲ್ಲಿ ನಿರ್ಮಿಸಲಾದ ಮೊದಲ ತೇಲುವ ಸೇತುವೆ ಇದಾಗಿದೆ. 150 ಮೀಟರ್ ಉದ್ದವಿದೆ. 50 ಪ್ರವಾಸಿಗರು ಏಕಕಾಲಕ್ಕೆ ಸೇತುವೆಯಲ್ಲಿ ನಿಂತು ಸೂರ್ಯಾಸ್ತ ನೋಡಬಹುದು.
![](https://veekshakanews.com/wp-content/uploads/2023/12/255848237603816206b349b869a197b5ae0dce24c6a07c00153b36eeeaf3d1aea7538b262-1024x576.jpg)
ತೇಲುವ ಸೇತುವೆಯ ಉದ್ದಕ್ಕೂ 12 ಮಂದಿ ಜೀವ ರಕ್ಷಕರನ್ನು ಪ್ರವಾಸಿಗರ ಸುರಕ್ಷತೆಗಾಗಿ ನಿಯೋಜಿಸಲಾಗಿದೆ. ಲೈಫ್ ಜಾಕೆಟ್ ಕಡ್ಡಾಯ ಮಾಡಲಾಗಿದೆ. ಡಿ.27ರಂದು ಉದ್ಘಾಟನೆ ನಡೆಯಲಿದೆ. ಇಲ್ಲಿನ ಬೀಚ್ ಅನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.