ಸಮಗ್ರ ಸುದ್ದಿ
ತನ್ನ ಅಜ್ಜಿಯನ್ನೇ ಕೊಂದು ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದ ಆರೋಪಿ ಕಾನರ್ಪ ನಿವಾಸಿ ಅಶೋಕ ಗೌಡ ಆಸ್ಪತ್ರೆಯಲ್ಲಿ ಸಾವು
ಬೆಳ್ತಂಗಡಿ : 2022ನೇ ಜುಲೈ 23 ರಂದು ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಕಾನರ್ಷ ಮನೆ ನಿವಾಸಿ ಅಶೋಕ ಗೌಡ (೩೫ವ) ಎಂಬಾತನು ತನ್ನ ಅಜ್ಜಿ ಶ್ರೀಮತಿ ಅಕ್ಕು ಗೌಡ (೮೫ವ) ಎಂಬವರನ್ನು ಭೀಕರವಾಗಿ ಕೊಲೆ ಮಾಡಿ ಚಿನ್ನಾಭರಣಗಳನ್ನು ದರೋಡೆ ಮಾಡಿ ಆತನನ್ನು ಬಂಧಿಸಿದ ಪೊಲೀಸರು ಆತನ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಕ್ರ ೫೪/೨೦೨೨ ಕಲಂ: ೩೯೭, ೩೦೨ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆತನನ್ನು ಮಂಗಳೂರು ಸಬ್ ಜೈಲಿನಲ್ಲಿದರು .
ದುಶ್ಚಟಗಳಿಗೆ ದಾಸನಾಗಿದ್ದ ಆರೋಪಿ ಅಶೋಕ ಗೌಡ, ಟಿ.ಬಿ. ಹಾಗೂ ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದು, ಆತನನ್ನು ಚಿಕಿತ್ಸೆಗಾಗಿ ವೆನ್ಹಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತನು ಚಿಕಿತ್ಸೆ ಫಲಿಸದೆ 2023 ರ ಜೂನ್ 7ರಂದು ಬೆಳಗ್ಗೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.