ಸಮಗ್ರ ಸುದ್ದಿ
ಮೇ 30: ಇಂದು ಸಂಜೆ ವಿಟ್ಲದಲ್ಲಿ ನೂತನ ಶಾಸಕರು- ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭ
![](https://veekshakanews.com/wp-content/uploads/2023/05/images-13-7-640x470.jpeg)
ವಿಟ್ಲ: ಪುತ್ತೂರು ವಿಧಾನ ಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಅಶೋಕ್ ಕುಮಾರ್ ರೈ ಯುವರ ಅಭಿನಂದನಾ ಸಭೆ ಮೇ 30 ಮಂಗಳವಾರ ವಿಟ್ಲ ಚರ್ಚ್ ಬಳಿಯ ಶತಮಾನೋತ್ಸವ ಸಮುದಾಯ ಭವನದಲ್ಲಿ ನಡೆಯಲಿದೆ,
![](https://veekshakanews.com/wp-content/uploads/2023/05/images-12-3.jpeg)
ಮಧ್ಯಾಹ್ನ 3.30 ಕ್ಕೆ ನಡೆಯುವ ಸಮಾರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ನಡೆಯಲಿದೆ.
![](https://veekshakanews.com/wp-content/uploads/2023/05/images-13-6.jpeg)
ಆದರಿಂದ ಪಕ್ಷದ ಮುಖಂಡರು, ಮುಂಚೂಣಿ ಘಟಕದ ಪದಾದಿಕಾರಿಗಳು,ವಲಯ, ಬೂತ್ ಮಟ್ಟದ ಪದಾಧಿಕಾರಿಗಳು, ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸಿಗೊಳಿಸಬೇಕಾಗಿ ಪ್ರಕಟಣೆ ತಿಳಿಸಿದೆ.