ಸಮಗ್ರ ಸುದ್ದಿ

ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲಾಯಿ ಮುಹಿಲನ್ ನೇಮಕ

Click below to Share News

ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, 10 ಅಧಿಕಾರಿಗಳ ವರ್ಗಾವಣೆ ಮಾಡಿದೆ. ಈ ಪಟ್ಟಿಯಲ್ಲಿ ದ.ಕ ಜಿಲ್ಲಾಧಿಕಾರಿ ಮತ್ತು ದ.ಕ ಜಿ.ಪಂ ಸಿಇಓ ಅವರನ್ನು ವರ್ಗಾವಣೆ ಮಾಡಲಾಗಿದೆ.

ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಅವರನ್ನು ವರ್ಗಾವಣೆ ಮಾಡಿ‌ಲು ಸರ್ಕಾರ ಆದೇಶ ಹೊರಡಿಸಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಎಂ.ಪಿ.ಮುಲ್ಲಾಯಿ ಮುಹಿಲನ್ ಅವರನ್ನು ನೇಮಕ ಮಾಡಿದೆ. ಆದರೆ ರವಿಕುಮಾರ್ ಅವರಿಗೆ ಸ್ಥಳ ‌ನಿಯೋಜನೆಯ ಮಾಹಿತಿ ಲಭ್ಯವಾಗಿಲ್ಲ. ಹಾಗೆಯೇ ದ.ಕ ಜಿ.ಪಂ ಸಿಇಓ ಕುಮಾರ್ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ಉಳಿದಂತೆ ಪಲ್ಲವಿ ಅಕುರಾತಿ, ವೆಂಕಟೇಶ್ ಎಂ, ರವೀಂದ್ರ ಪಿ.ಎನ್, ಕೆ. ಶ್ರೀನಿವಾಸ್ ಸೇರಿ ಹಲವರನ್ನು ವರ್ಗಾವಣೆ ಮಾಡಲಾಗಿದೆ‌.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!