ಸಮಗ್ರ ಸುದ್ದಿ

ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲುವವರು ಯಾರು?

Click below to Share News

🔅ಆಶಾ ತಿಮ್ಮಪ್ಪ – ಬಿ.ಜೆ.ಪಿ🔅
🔅ಅಶೋಕ್ ಕುಮಾರ್ ರೈ – ಕಾಂಗ್ರೆಸ್🔅
🔅ಅರುಣ್ ಕುಮಾರ್ ಪುತ್ತಿಲ – ಪಕ್ಷೇತರ🔅
💥ಮೇ 13ರಂದು ಫಲಿತಾಂಶ💥
ಪುತ್ತೂರು : ಕರ್ನಾಟಕ ವಿಧಾನಸಭಾ ಚುನಾವಣೆ , ಪುತ್ತೂರು ವಿಧಾನಸಭಾ ಕ್ಷೇತ್ರ ದ ಈ ಬಾರಿಯ ಚುನಾವಣೆ ಬಹಳಷ್ಟು ವಿಶಿಷ್ಟತೆಗೆ ಕಾರಣವಾಗಿದೆ, ಅಶೋಕ್ ಕುಮಾರ್ ರೈ, ಆಶಾ ತಿಮಪ್ಪ, ದಿವ್ಯಪ್ರಭಾ ಗೌಡ, ಡಾ. ಬಿ ಕೆ ವಿಷುಕುಮಾರ್ ಗೌಡ, ಶಾಪಿ ಬೆಳ್ಳಾರೆ, ಐವನ್ ಪೇರವೋ ಪಿ, ಅರುಣ್ ಕುಮಾರ್ ಪುತ್ತಿಲ, ಮತ್ತು ಸುಂದರ ಕೊಯಿಲ ಹೀಗೆ ಒಟ್ಟಾಗಿ 8 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿ ಮೇ 10ರಂದು ಪುತ್ತೂರು ಕ್ಷೇತ್ರದಲ್ಲಿ ಶೇ.80.08 ಮತದಾನನಡೆದಿದ್ದು, ಈ ಎಲ್ಲಾ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರದೊಳಗೆ ಭದ್ರವಾಗಿದೆ.


ಪುತ್ತೂರು ಕ್ಷೇತ್ರದಲ್ಲಿ ಪ್ರಮುಖವಾಗಿ ಆಶಾ ತಿಮ್ಮಪ್ಪ – ಬಿ.ಜೆ.ಪಿ
ಅಶೋಕ್ ಕುಮಾರ್ ರೈ – ಕಾಂಗ್ರೆಸ್
ಅರುಣ್ ಕುಮಾರ್ ಪುತ್ತಿಲ – ಪಕ್ಷೇತರ, ಈ ಮೂರು ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಇದ್ದು, 3 ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಗೆಲುವು ತಮ್ಮದೇ ಎಂಬ ಆತ್ಮವಿಶ್ವಾಸದಿಂದ ಮೇ 13ರಂದು ನಡೆಯುವ ಮತ ಏಣಿಕೆ ದಿನಕ್ಕಾಗಿ ಕಾದು ನೋಡುವಂತಾಗಿದೆ, ಪುತ್ತೂರು ವಿಧಾನಸಭಾ ಭಾಗದ ಜನರಲ್ಲಿ ಹಲವು ಕುತೂಹಲಕ್ಕೆ ಕಾರಣವಾಗಿದ್ದೂ, ಮುಂದಿನ ಐದು ವರ್ಷಗಳ ಕಾಲ ಪುತ್ತೂರು ಕ್ಷೇತ್ರದ ಶಾಸಕರು ಯಾರು ಎನ್ನುವ ಪ್ರಶ್ನೆಗೆ ಮೇ 13ರಂದು ಸ್ಪಷ್ಟ ಉತ್ತರ ದೊರೆಯಲಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!